Janataa24 NEWS DESK

ತುರುವೇಕೆರೆ ತಾಲೂಕು ಕರುನಾಡ ವಿಜಯ ಸೇನೆ ನೂತನ ಸಾರಥಿಯಾಗಿ ಗವಿ ರಂಗಪ್ಪ ಆಯ್ಕೆ
ಮಾಡಿ ಘೋಷಣೆ ಮಾಡಿದ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಕರುನಾಡು ವಿಜಯ ಸೇನೆ ವತಿಯಿಂದ ಸಭೆಯೊಂದನ್ನು ಆಯೋಜಿಸಲಾಗಿದ್ದು, ಈ ಸಭೆಗೆ ಜಿಲ್ಲಾಧ್ಯಕ್ಷರಾದ ಅರುಣ್ ಕೃಷ್ಣಯ್ಯ ಅವರ ಉಪಸ್ಥಿತಿಯಲ್ಲಿ ಈ ಹಿಂದೆ ಇದ್ದಂತಹ ತಾಲೂಕು ಅಧ್ಯಕ್ಷರಾದ ಎಚ್ಎಸ್ ಸುರೇಶ್ ರವರನ್ನು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ, ತುರುವೇಕೆರೆ ತಾಲೂಕಿಗೆ ಗವಿ ರಂಗಪ್ಪ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಕರುನಾಡು ವಿಜಯ ಸೇನೆಯ ಪದಾಧಿಕಾರಿಗಳು ಹಾಜರಿದ್ದು, ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ರವರಿಗೆ, ಮತ್ತು ನೂತನವಾಗಿ ತಾಲೂಕು ಅಧ್ಯಕ್ಷರಾದ ಗವಿ ರಂಗಪ್ಪ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.