JANATAA24 NEWS DESK
Turuvekere: ಸಿಸಿ ರಸ್ತೆ ಇಲ್ಲದೆ ಕಂಗಾಲಾಗಿದ್ದ ರಸ್ತೆಗೆ, ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ ಟಿ ಕೃಷ್ಣಪ್ಪ.

ತುರುವೇಕೆರೆ: ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ಗ್ರಾಮದ ಕಾಲೋನಿಯಲ್ಲಿ ಅನೇಕ ವರ್ಷಗಳಿಂದ ಸಿಸಿ ರಸ್ತೆ ಇಲ್ಲದೆ ಪರಿತಪ್ಪಿಸುತ್ತಿದ್ದ ಜನತೆಗೆ ನೂತನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಂ ಟಿ ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು, ಇದಲ್ಲದೆ ಮಾಯಸಂದ್ರ ಹೋಬಳಿಯಲ್ಲಿ ಉತ್ತಮ ಗುತ್ತಿಗೆದಾರ ಎಂಬ ಖ್ಯಾತಿ ಹೊಂದಿರುವ ಸ್ವಾಮಿ ಎಂಬ ಗುತ್ತಿಗೆದಾರ ಸುಮಾರು 10 ಲಕ್ಷ ರೂಪಾಯಿಗಳ ಸಿಸಿ ರಸ್ತೆ ಕಾಮಗಾರಿ ಮಾಡಲಿದ್ದು,
ಇಂತಹ ಉತ್ತಮ ಗುತ್ತಿಗೆದಾರನ ಗುರುತಿಸಿ ಶಾಸಕರು ಕಾಮಗಾರಿ ನೀಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿದ್ದು ಶಾಸಕರು ತಾಲೂಕಿನ ಬಡವರ ಬಂಧು ಎಂಬ ಮಾತು ಕೇಳಿ ಬರುತ್ತಿದ್ದು ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ಒದಗಿಸುವ ಶಾಸಕರ ನಡೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಪ್ರಶಂಸೆಗೆ ಜೊತೆಗೆ ಶಾಸಕರ ಪುತ್ರ ರಾಜೀವ್ ರವರು ಕೂಡ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಲೂಕಿನ ಯುವಕರ ಕಣ್ಮಣಿ ಎಂದೇ ಖ್ಯಾತಿ ಪಡೆದು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಸಂಚರಿಸಿ ಮೂಲಭೂತ ಸೌಕರ್ಯ ಇಲ್ಲದೆ ಇರುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಿಗೆ ದೊರಕಬೇಕಾದಂತ ಕಾಮಗಾರಿಗಳ ವಿವರಣೆಯನ್ನು ನೀಡಿ ಶಾಸಕರ ಮುಖೇನ ಮೂಲಭೂತ ಸೌಕರ್ಯ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದು ತಾಲೂಕಿನ ಜನತೆಗೆ ಉತ್ತಮ ನಾಯಕನಾಗಿ ಹೊರಹಮ್ಮಿದ್ದಾರೆ ಎನ್ನಬಹುದು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್, ಶಿವಾಜಿ, ಮಂಜುನಾಥ್, ಪ್ರೇಮಕುಮಾರ್, ಬೈತರಹೊಸಳ್ಳಿ ಕಿಟ್ಟಿ, ಗುಡಿ ಗೌಡ ನಾಗೇಶ್, ಕೆಂಪರಾಜು, ಮಾದ, ಗ್ರಾಮಸ್ಥರಾದ ಶಿವಣ್ಣ, ಶ್ರೀನಿವಾಸ್, ವೆಂಕಟೇಶ್, ಮಣಿ, ಆನಂದ, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.