Janataa24 NEWS DESK
Farming: ಫಸಲಿಗೆ ನೀರು ಕಟ್ಟಲು ಹೋಗಿ ವಿದ್ಯುತ್ ಅವಘಡ ಇಬ್ಬರ ಸಾವು.

ಪಾವಗಡ: ತಾಲ್ಲೂಕಿನ ಟಿ.ಎನ್.ಬೆಟ್ಟದ ಹೊರವಲಯದ
ಸರ್ವೇ ನಂಬರ್ 293 ರ ಜಮೀನಿನಲ್ಲಿ ವಿದ್ಯುತ್ ಸ್ವಿಚ್ ಹಾಕಲು ಹೋಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.
29 ವರ್ಷದ ಅನಿಲ್ ಕುಮಾರ್
ತಂದೆ ಹನುಮಂತರಾಯಪ್ಪ ಮತ್ತು ಸುಮಾರು 35 ವರ್ಷದ
ಪುಟ್ಟರಾಜು, ತಂದೆ ರಾಮರಾಜಪ್ಪ ಅವಘಡಕ್ಕೆ ತುತ್ತಾಗಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಭಿತ್ತನೆ ಮಾಡಿದ್ದ ರಾಮರಾಜಪ್ಪನ ಕುಟುಂಬಸ್ಥರು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ ಹೊಲಕ್ಕೆ ಬರುತ್ತಿದ್ದರು. ನೀರು ಹಾಯಿಸುತ್ತಿದ್ದರು.. ಎಂದಿನಂತೆ ಶುಕ್ರವಾರ ರಾತ್ರಿಯೂ ಈ ನತದೃಷ್ಟ ಪುಟ್ಟರಾಜು ವಿನೊಂದಿಗೆ ಪಾಪ ಅನಿಲ್ ಕುಮಾರ್ ನಿಗೆ ಒಂದು ಕೈ ಇರಲಿಲ್ಲ. ಎಂಬುದಾಗಿ ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಪಾವಗಡ ಅರಸೀಕೆರೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/