ಬಾಗಲಕೋಟೆ:- ಸತೀಶ್ ಸಣ್ಣಕ್ಕಿ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆಯನ್ನು ತಾಲೂಕು ಮಾಡಬೇಕೆಂದು ಒತ್ತಾಯಿಸಿ ಬಸವನಗರ ಸಾರ್ವಜನಿಕರು ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು 200ನೇ ದಿನದ ವಿಶೇಷ ಪ್ರತಿಭಟನೆ ಮಾಡಿದರು.

ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಟಿಕೇಟ್ ಆಕಾಂಕ್ಷಿ ಆದಂತಹ ಅರ್ಜುನ ಹಲಗಿಗೌಡರ್, ಶಂಕರ್ ಹುಕ್ಕೇರಿ, ದರೆಪ್ಪ ಗುಟ್ಲಿ, ಮತ್ತು ಮಾಹಾಲಿಂಗಪುರ ಊರಿನ ಹಿರಿಯರು ಗಣ್ಯ ವ್ಯಕ್ತಿಗಳು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.