ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್: ಬಿಗ್ ಬಾಸ್ ನೋಡುಗರ ಬಿಸಿ ಚರ್ಚೆ

ಬೆಂಗಳೂರು: ಶ್ರೀನಿಧಿ ಒಡೆಯರ್

images28229282629

ಪ್ರತಿ ಬಾರಿಯೂ ಬಿಗ್ ಬಾಸ್ ಫಿನಾಲೆ ವೇದಿಕೆಯ ಮೇಲೆ ಉಳಿಯೋದು ಐದೇ ಐದು ಜನ. ಆದರೆ, ಮನೆಯಲ್ಲಿ ಇರೋದು ಆರು ಜನ. ಹಾಗಾಗಿ ಅನಿವಾರ್ಯವಾಗಿ ಮನೆಯಿಂದ ಒಬ್ಬರನ್ನು ಆಚೆ ಕಳುಹಿಸಲೇ ಬೇಕಾಯಿತ್ತು. ಅಂಥದ್ದೊಂದು ಪ್ರಕ್ರಿಯೆ ನಿನ್ನೆ ಮಧ್ಯರಾತ್ರಿಯೇ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಆಚೆ ಬಂದಿದ್ದಾರೆ. ಯಾವಾಗಲೂ ನಂಬರ್ ಜೊತೆನೇ ಬದುಕುತ್ತಿದ್ದ ಗುರೂಜಿಯನ್ನೇ ಅದೇ ನಂಬರ್ ಗೇಮ್ ಮೂಲಕ ಆಚೆ ಕಳುಹಿಸಲಾಗಿದೆ.

ಈ ವಾರಾಂತ್ಯದ ಕಿಚ್ಚನ ಶೋನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆಯನ್ನು ಪಡೆದಿದ್ದರು. ಈ ಕಾರಣದಿಂದಾಗಿಯೇ ಗುರೂಜಿ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಮಧ್ಯರಾತ್ರಿಯೇ ಆರ್ಯವರ್ಧನ್ ಬಿಗ್ ಬಾಸ್ ಮನೆಯಿಂದ ಸೂಟ್ ಕೇಸ್ ತಗೆದುಕೊಂಡು ಮನೆ ಸೇರಿದ್ದಾರೆ.

ನಿನ್ನೇ ರಾತ್ರಿ ವಿನೂತನ ಎಲಿಮಿನೇಷನ್ ಪ್ರಕ್ರಿಯೆ ನಡೆಯಿತು. ನಂಬರ್ ಜೊತೆ ಕಾಣಿಯಾಗುವಂತಹ ಗೇಮ್ ‍ಪ್ಲ್ಯಾನ್ ಅದು. ನಂಬರ್ 9 ರ ಜೊತೆ ಮುಳುಗುವ ಮತ್ತು ಅದರೊಂದಿಗೆ ಮತ್ತೆ ವಾಪಸ್ಸಾಗುವಂತೆ ಅದನ್ನು ಸಿದ್ಧಗೊಳಿಸಲಾಗಿತ್ತು. ಯಾವ ಸ್ಪರ್ಧಿ ನಂಬರ್ ಜೊತೆ ವಾಪಸ್ಸು ಬರುವುದಿಲ್ಲವೋ, ಅವರು ಎಲಿಮಿನೇಟ್ ಎಂದು ಘೋಷಿಸುವುದಾಗಿ ತಿಳಿಸಿತ್ತು. ಆ ನಂಬರ್ ಜೊತೆ ಆರ್ಯವರ್ಧನ್ ಗುರೂಜಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅದು ಇನ್ನೂ ಪ್ರಸಾರವಾಗಿಲ್ಲ.

ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿರುವ ವಿಚಾರ ವಾಹಿನಿಯಾಗಲಿ ಅಥವಾ ಗುರೂಜಿ ಆಗಲಿ ಖಚಿತ ಪಡಿಸಿಲ್ಲ. ಆದರೆ, ಗುರೂಜಿ ಮನೆಯಿಂದ ಆಚೆ ಬಂದಿರುವ ವಿಚಾರ ಬಿಗ್ ಬಾಸ್ ನೋಡುಗರ ನಡುವೆ ಚರ್ಚೆ ಆಗುತ್ತಿದೆ. ಫಿನಾಲೆಯಲ್ಲಿ ಇರಬೇಕಾದವರು ಮನೆ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *