Janataa24 NEWS DESK
2018 ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ನಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಅಚಲವಾಗಿ ಪಣತೊಟ್ಟು 2023 ರ UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಕಾಶಂ ಜಿಲ್ಲೆಯ ಮಾಜಿ ಪೊಲೀಸ್ ಪೇದೆ ಉದಯ್ ಕೃಷ್ಣಾ ರೆಡ್ಡಿ 780 ನೇ ರಾಂಕ್ ಗಳಿಸಿದ್ದಾರೆ.
ಉದಯ್ ಕೃಷ್ಣಾ ರೆಡ್ಡಿ(Uday Krishna Reddy) ಯವರ ಈ ಗಮನಾರ್ಹ ಸಾಧನೆಯ ಪಯಣವು 2018 ರಲ್ಲಿ ವೈಯಕ್ತಿಕ ವಿವಾದದ ಮೇಲೆ ಸರ್ಕಲ್ ಇನ್ಸ್ಪೆಕ್ಟರ್(Inspector) ಅವರನ್ನು 60 ಸಹ ಪೊಲೀಸರ ಮುಂದೆ ಸಾರ್ವಜನಿಕವಾಗಿ ಅವಮಾನಿಸಿದಾಗ ಶುರುವಾಯಿತು.

ಈ ಘಟನೆಯು ಉದಯ್ ಕೃಷ್ಣಾ ರೆಡ್ಡಿಯವರನ್ನು ತನ್ನ ಪೊಲೀಸ್(Police) ಕೆಲಸಕ್ಕೆ ರಾಜಿನಾಮೆ ನೀಡಿ ಐಎಎಸ್ ಅಧಿಕಾರಿಯಾಗಬೇಕೆಂಬ ಹೊಸ ಕನಸಿನ ಸಸಿಗೆ ನೀರೆರೆಯಿತು.
ಐ ಎ ಎಸ್(IAS) ಅಧಿಕಾರಿಯಾಗುವ ಆಕಾಂಕ್ಷೆಯೊಂದಿಗೆ ಯುಪಿಎಸ್ಸಿ ಪರೀಕ್ಷೆಯ ತಯಾರಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಇಂದು ಆ ಕನಸನ್ನು ನನಸಾಗಿಸಿಕೊಂಡಿದ್ದಾರೆ.
https://www.janataa24.com/mandya-actor-darshan-bharjari-road-show-for-cong/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en