JANATAA24 NEWS DESK
Tiptur: ಏಪ್ರಿಲ್ 01ರಿಂದ ಹೆಚ್.ಬೈರಾಪುರ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಪ್ಲೇಗಿನಮ್ಮ ದೇವಿಯವರ ಜಾತ್ರಾ ಮಹೋತ್ಸವ ಪ್ರಾರಂಭ.

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ಕ್ಷೇತ್ರ ಹೆಚ್.ಬೈರಾಪುರ ಗ್ರಾಮ
ದೇವತೆ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಪ್ಲೇಗಿನಮ್ಮ ದೇವಿಯವರ ಜಾತ್ರಾ ಮಹೋತ್ಸವ 01/04 ಆರಂಭವಾಗಿ,05/04 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು,
01/04 ರಂದು ಶ್ರೀ ಅಮ್ಮನವರ ಮೂಲಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರದೊಂದಿಗೆ,ಮದವಣಗಿತ್ತಿ ಕಾರ್ಯಕ್ರಮ,ಪ್ರಸಾದ ವಿನಿಯೋಗ ನಂತರ ಮದ್ದಿನ ಪ್ರದರ್ಶನ.
02/04 ರಂದು ಭಕ್ತಾದಿಗಳಿಂದ ಶ್ರೀ ಅಮ್ಮನವರ ಕಂಕಣಧಾರಣೆ. 03/04 ಆರತಿಬಾನ ಮತ್ತು ದೇವರುಗಳಿಗೆ ಪುಷ್ಪಾಲಂಕಾರ.
04/04 ರಂದು ಗಂಗಾಸ್ನಾನ. ಮೂಲಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ. ಮಧ್ಯಾಹ್ನ ಶ್ರೀ ಮಾರಮ್ಮನವರ ಕುಣಿತ.
ದೇವರುಗಳಿಗೆ ವಿಶೇಷ ಹಂಸ ದರ್ಬಾರ್ ಪುಷ್ಪಾಲಂಕೃತ ಅಲಂಕಾರ ವಾಹನದೊಂದಿಗೆ, ಚಿಟ್ಟಿಮೇಳ ಮತ್ತು ನಾಸಿಕ್ ಡೋಲ್ ಸೇರಿದಂತೆ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ
ಶ್ರೀ ದೇವರುಗಳ ಉತ್ಸವ. ರಾತ್ರಿ ಬೆಂಗಳೂರಿನ ಶ್ರುತಿ ಇವೆಂಟ್ಸ್ ವತಿಯಿಂದ ರಸಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮದ ನಂತರ ಮದ್ದಿನ ಪ್ರದರ್ಶನ.
05/04 ರಂದು ಶ್ರೀ ಅಮ್ಮನವರ ದಿವ್ಯ ರಥೋತ್ಸವ, ಕೆರಗೋಡಿ- ರಂಗಾಪುರ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿಯವರ ಆಗಮನ, ಉಯ್ಯಾಲೋತ್ಸವ ಮತ್ತು ಭoಡಾರ ಸೇವೆ ನಂತರ ಅನ್ನಸಂರ್ಪಣೆ ಕಾರ್ಯಕ್ರಮ. ಸಂಜೆ 5:00ಗೆ ದೇವರುಗಳ ಸಿಡಿ ಉತ್ಸವ. ರಾತ್ರಿ ಮಹಾ ಮಂಗಳಾರತಿಯೊಂದಿಗೆ ಶ್ರೀ ದೇವರುಗಳ ಅದ್ದೂರಿ ಮಣೆವು ಕಾರ್ಯಕ್ರಮವನ್ನು
ಹಮ್ಮಿಕೊಂಡಿದ್ದು ಗ್ರಾಮಸ್ಥರು, ಸರ್ವ ಭಕ್ತಾದಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸಬೇಕೆಂದು ದೇವಾಲಯದ
ಧರ್ಮದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.