Janataa24 NEWS DESK
Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!
ಪಾವಗಡ: ಬೆಸ್ಕಾಂ ಇಲಾಖೆಯ ಹತ್ತಾರು ವಿದ್ಯುತ್ ಪರಿವರ್ತಕಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಇಲಾಖೆಗೆ ವಂಚಿಸಿರುವ ಬೆಸ್ಕಾಂ ನಿವೃತ್ತ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮ ಪಕ್ಷದ ತುಮಕೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ ತುಮಕೂರು ವಿಭಾಗಕ್ಕೆ ಸೇರಿದ ಚಿತ್ರದುರ್ಗ ಬೆಸ್ಕಾಂ ವಲಯ ಕಚೇರಿಯ ಮುಖ್ಯ ಎಂಜಿನಿಯರ್ಗೆ ಸೋಮವಾರ ಮನವಿ ಸಲ್ಲಿಸಿದರು.
ಕಳೆದ ಮೇ 31ರಂದು ನಿವೃತ್ತಿಯಾಗಿರುವ ಬೆಸ್ಕಾಂ ಪಾವಗಡ ಉಪ ವಿಭಾಗದ ಕೋಟಗುಡ್ಡ ಶಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಮಾಂಜನೇಯ ಅವರು, ತಮ್ಮ ಅವಧಿಯಲ್ಲಿ ದುರ್ಬಳಕೆ ಮಾಡಿಕೊಂಡು ಸುಮಾರು
11 ಗ್ರಾಮಗಳಲ್ಲಿ ಕುಡಿಯುವ ನೀರೆತ್ತಲು ಅಳವಡಿಸಿದ್ದ 16 ಪರಿವರ್ತಕ ಗಳನ್ನು ಇಲಾಖೆ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಬಿಚ್ಚಿಕೊಂಡು ಹೋಗಿರುವ ಬಗ್ಗೆ ಸಾರ್ವಜನಿಕವಾಗಿ ದೂರು ಬಂದ ಹಿನ್ನೆಲೆ ನಾವು ಖುದ್ದು ಸ್ಥಳ ಪರಿಶೀಲಿ ಸಿದಾಗ 16 ಪರಿವರ್ತಕ ಇರುವುದಿಲ್ಲ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥನಿವೃತ್ತ ಬೆಸ್ಕಾಂ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಇದರ ಬಗ್ಗೆ ಬಹಳವಾಗಿ ತನಿಖೆ ಮಾಡಿದ್ದರೆ ಇಂತಹ ಅನೇಕ ವಿವಿಧ ಪರಿವರ್ತಕ ಪ್ರಕರಣಗಳು ಹೂರ ತೆಗೆಯಬಹುದು ಮತ್ತು ಇದರಲ್ಲಿ ಬಹಳಷ್ಟು ಜನ ಶಾಮಿಲ್ ಆಗಿರುವ ಶಂಕೆ ಹಾಗೂ ಟಿಸಿ ಕಳ್ಳರು ಹೊರ ತೆಗೆಯಬಹುದು ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಆಮ್ ಆದ್ಮಿ ಪಾರ್ಟಿ ತುಮಕೂರು ಜಿಲ್ಲೆ ಸಂಘಟನಾ ಕಾರ್ಯದರ್ಶಿ ಎನ್. ರಾಮಾಂಜಿನಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಪಕ್ಷದ ಮುಖಂಡರಾದ ರವಿ, ಲೋಕೇಶ್ವರಪ್ಪ, ಲಿಂಗರಾಜು ಮತ್ತಿತರರಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.