Janataa24 NEWS DESK
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

ತುರುವೇಕೆರೆ: ತಾಲೂಕಿನ ಅಪ್ಪಸಂದ್ರ ಗ್ರಾಮದಲ್ಲಿ ಜಮೀನು ಕೈ ತಪ್ಪಿದಕ್ಕೆ ಪಕ್ಕದ ಜಮೀನು ಮಾಲೀಕರಿಂದಲೇ ವಿಕೃತಿ.

ಫಸಲಿಗೆ ಬಂದ ತೆಂಗಿನ ಮರಗಳನ್ನು ಕಳೆದುಕೊಂಡ ವೃದ್ಧೆಯ ತೀವ್ರ ಆತಂಕ.ಧರೆಗುರುಳಿದ ಮರಗಳ ಮುಂದೆ ಅಪ್ಪಸಂದ್ರ ಗ್ರಾಮದ ಸಿದ್ಧಗಂಗಮ್ಮ ಕಣ್ಣೀರು.
ಸರ್ವೆ ನಂ 120ರ 04 ಎಕರೆ 01 ಗುಂಟೆ ಸಿದ್ಧಗಂಗಮ್ಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಜಾಗ.30 ಗುಂಟೆ ಜಮೀನಿನಲ್ಲಿ 12 ವರ್ಷಗಳಿಂದ ತೆಂಗಿನ ಮರಗಳನ್ನು ಬೆಳೆಸಿದ್ದ ವೃದ್ಧೆ.ಗ್ರಾಮದ ಕಾಳೇಗೌಡ ಪುತ್ರರಾದ ಉಮೇಶ, ರಾಜ ಎಂಬುವರಿಂದ ಮರಗಳ ಕಟಾವು ಆರೋಪ.
ಕೆಲವು ವರ್ಷಗಳಿಂದಲೂ ಇಬ್ಬರು ನಡುವೆ ಜಮೀನು ವಿವಾದ ಇತ್ತು.
ಇತ್ತೀಚೆಗೆ ಸರ್ವೆ ಅಧಿಕಾರಿಗಳು ಇಬ್ಬರ ಜಮೀನು ಪರಿಶೀಲನೆ ನಡೆಸಿದ್ರು.ಬಳಿಕ ಇಬ್ಬರ ಜಮೀನಿಗೆ ಗಡಿ ಗುರುತು ಮಾಡಿದ್ದ ಸರ್ವೆ ಅಧಿಕಾರಿಗಳು.ಅತಿಕ್ರಮ ಪ್ರವೇಶ ಮಾಡಿ ತೆಂಗಿನ ಮರಗಳನ್ನು ಕಡಿದಿದ್ದಾರೆ ಅಂತಾ ವೃದ್ಧೆಯ ಸಂಬಂಧಿಕರ ಆರೋಪ.
ಈ ಕುರಿತು ದಂಡಿನಶಿವರ ಪೊಲೀಸರಿಗೆ ದೂರು ನೀಡಿದ ನೊಂದ ವೃದ್ಧೆ ಸಿದ್ಧಗಂಗಮ್ಮ.
ಸೂಕ್ತ ರಕ್ಷಣೆ ಮತ್ತು ಪರಿಹಾರ ಕೊಡಿಸಿ ಅಂತಾ ಕಾನೂನು ಕ್ರಮಕ್ಕೆ ವೃದ್ಧೆ ಒತ್ತಾಯ ಮಾಡಿದ್ದಾರೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/
Turuvekere: ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪರಾಭವಗೊಂಡ ಅಭ್ಯರ್ಥಿಯಿಂದ ಅಭಿನಂದನೆ.
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.