Gubbi: ಶೀಘ್ರ ವಿದ್ಯುತ್ ಉಪಸ್ಥಾವರ ಘಟಕಗಳ ಸ್ಥಾಪನೆ.

 

JANATAA24 NEWS DESK

 

Gubbi: ಶೀಘ್ರ ವಿದ್ಯುತ್ ಉಪಸ್ಥಾವರ ಘಟಕಗಳ ಸ್ಥಾಪನೆ.

Gubbi: ಶೀಘ್ರ ವಿದ್ಯುತ್ ಉಪಸ್ಥಾವರ ಘಟಕಗಳ ಸ್ಥಾಪನೆ.

ಗುಬ್ಬಿ : ರೈತರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಭಾದಿಸದಂತೆ ತಾಲ್ಲೂಕಿನಲ್ಲಿ ಸುಮಾರು 6 ರಿಂದ 7 ವಿದ್ಯುತ್ ಉಪಸ್ಥಾವರ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಭರವಸೆ ನೀಡಿದರು.

 

ತಾಲ್ಲೂಕಿನ ಗುಡ್ಡದಹಳ್ಳಿ ಗೊಲ್ಲರಹಟ್ಟಿ, ತಿರುಮಲ ದೇವರಹಟ್ಟಿ, ಮಂಚಲದೊರೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ವಿದ್ಯುತ್ ಉಪಸ್ಥಾವರ ಘಟಕಗಳಲ್ಲಿ ಅಧಿಕ ವಿದ್ಯುತ್ ಒತ್ತಡ ಉಂಟಾಗಿದ್ದು ರೈತರಿಗೆ ಅನುಕೂಲಕರವಾಗುವ ದೃಷ್ಟಿಯಿಂದಾಗಿ

 

ತಾಲೂಕಿನ ದೋಣೇಗಂಗಾ, ಹೊಸಹಳ್ಳಿ ಕ್ರಾಸ್, ಕೊಂಡ್ಲಿ ಕ್ರಾಸ್, ಭೋಗಸಂದ್ರ, ನಲ್ಲೂರು, ಯರಬಳ್ಳಿ,ತೊಳೆಕೊಪ್ಪ,ಗಳಲ್ಲಿ ಶೀಘ್ರವಾಗಿ ವಿದ್ಯುತ್ ಉಪಸ್ತಾವರ ಘಟಕಗಳನ್ನು ಸ್ಥಾಪಿಸಲಾಗುವುದು ಹಾಗೂ ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು

 

ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ನಿಯೋಜಿಸಲಾಗುವುದು ಎಂದ ಅವರು ಹಾಗಲವಾಡಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರಿ ಜಾಗದ ಅಭಾವವಿದ್ದು ಸ್ಥಳೀಯರು ಸಹಕಾರ ನೀಡಿದರೆ ದೇವಾಲಯದ ಬಳಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಗ್ರಾ,ಪಂ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಮಂಜುಳಾ,ತಾಪಂ ಮಾಜಿ ಸದಸ್ಯ ಕರಿಯಮ್ಮ ರಮೇಶ್, ಸಣ್ಣ ರಂಗಯ್ಯ ಮಹದೇವ್ ಮುಖಂಡರಾದ ಬಾಬು, ಬಿದರೆ ಯತೀಶ್, ಶಿವಾಜಿ ರಾವ್, ಉಮೇಶ್, ಸಾತೇನಹಳ್ಳಿ ಸತೀಶ್, ಪಿಡಿಓ ರಾಜೇಂದ್ರ ಪ್ರಸಾದ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

 

ವರದಿ : ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *