Gubbi: ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿರುವ ಸಮುದ್ರನಕೋಟೆ ನಿವಾಸಿಗಳು

Janataa24 NEWS DESK

Gubbi: Gubbi: ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿರುವ ಸಮುದ್ರನಕೋಟೆ ನಿವಾಸಿಗಳು.

Gubbi,current news,tumkur,

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ತ್ಯಾಗಟೊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದ್ರನಕೋಟೆ ಗ್ರಾಮದ ತೋಟಗಳಲ್ಲಿ ತ್ರೀ ಫೇಸ್ ಹಳೆಯ ವಿದ್ಯುತ್ ತಂತಿ ಮತ್ತು ಕಂಬಗಳು ಮುರಿದು ಬೀಳುತ್ತಿದ್ದು ತೋಟದಲ್ಲಿ ನಿವಾಸಿಗಳು ಭಯಬಿತರಾಗಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಗೋವಿಂದರಾಜು ಮಾತನಾಡಿ ಸುಮಾರು ಕಳೆದ 40 ರಿಂದ 50 ವರ್ಷಗಳಹಿಂದೆ ವಿದ್ಯುತ್ ತಂತಿ ಕಂಬಗಳು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸರ್ವೇ ನಂಬರ್ ಜಮೀನುಗಳಲ್ಲಿ ಅಡ್ಡದಿಡ್ಡಿಯಾಗಿ ಬೇಜವಾಬ್ದಾರಿತನದಿಂದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸಿದ್ದರು .
ದಿನಗಳು ಕಳೆದಂತೆ ರೈತರು ಕೊಳವೆಬಾವಿ ಮತ್ತು ಕೃಷಿ ತೋಟಗಾರಿಕೆಗಳನ್ನು ಮಾಡುತ್ತಾ ಬಂದಿದ್ದು ದಿನ ಕಳೆದಂತೆ ತೋಟದ ಗರಿ ಎಡೆ ಮಟ್ಟೆಗಳು ವಿದ್ಯುತ್ ತಂತಿಗಳ ಮೇಲೆ ಬೀಳುವುದರಿಂದ ವಿದ್ಯುತ್ ತಂತಿ ಮತ್ತು ಕಂಬಗಳು ತುಂಡಾಗುತ್ತಿದ್ದು ಬೆಸ್ಕಾಂ ಇಲಾಖೆಗೆ ಮಾರ್ಗ ಬದಲಾವಣೆಗಾಗಿ ಸಾಕಷ್ಟು ಬಾರಿ ಮನವಿ ಮಾಡಿದರು ಸ್ಥಳೀಯ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮಹಿಳೆ ನಳಿನ ಮಾತನಾಡಿ ನಾವು ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದು ತಮಗೆ ದಿನನಿತ್ಯ ವಿದ್ಯುತ್ ಸಮಸ್ಯೆ ಆಗುತ್ತಿದೆ. ಕೋಟೆಯಲ್ಲಿ15 ರಿಂದ 20 ತೋಟದಮನೆಗಳಿವೆ. ರಾತ್ರಿಯ ವೇಳೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚು ಬಾಧಿಸುತ್ತಿದ್ದು . ವಿದ್ಯುತ್ ಸಮಸ್ಯೆಯಾದಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಸ್ಯೆಯಾಗುತ್ತದೆ ಹಾಗೂ ಕುಡಿಯುವ ನೀರಿಗೂ ಆಹಾಕಾರ ಉಂಟಾಗುತ್ತದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಇತ್ತ ಗಮನ ಹರಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಿದರೆ ತೋಟದ ಮನೆಯ ನಿವಾಸಿಗಳಿಗೆ ಅನುಕೂಲವಾಗುತ್ತದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ರಾಜಶೇಖರ್ ಮಾತನಾಡಿ ಹಳೆಯ ವಿದ್ಯುತ್ ಕಂಬ ಮತ್ತು ತಂತಿಗಳು ಹರಿದು ಬೀಳುತ್ತಿದ್ದು ತೋಟಕ್ಕೆ ಬರಲು ಭಯವಾಗುತ್ತಿದೆ. ಪ್ರತಿನಿತ್ಯ ಕೃಷಿ ಕೆಲಸ ಮಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ ಕಳೆದ ಎರಡು ದಿನಗಳ ಹಿಂದೆ ತೋಟದಲ್ಲಿ ಹಸು ಕಟ್ಟುವಾಗ ವಿದ್ಯುತ್ ತಂತಿ ‌ ಹರಿದುಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಮುಂದೆ ಯಾವುದೇ ವಿದ್ಯುತ್ ಅವಘಡ ಸಂಭವಿಸಿದರೂ ಬೆಸ್ಕಾಂ ಇಲಾಖೆಯಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕಿಡಿಕಾರಿದರು.

ಈ ಕೂಡಲೇ ಬೆಸ್ಕಾಂ ಇಲಾಖೆಯು ಮುಂಜಾಗ್ರತೆ ಕ್ರಮ ವಹಿಸದೆ ಹೋದರೆ ಬೆಸ್ಕಾಂ ಕಚೇರಿ ಮುಂಭಾಗ ಉಗ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ್, ಹರೀಶ್, ದೇವರಾಜ್, ರಾಜಶೇಖರ್, ರಘು, ಉಮೇಶ್, ಸಂಜಯ್ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಶ್ರೀಕಾಂತ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.instagram.com/janataa24igsh=aXM0Ym9zb2Y2YTRn

https://www.janataa24.com/pavagada-nss-students-can-learn-rural-values/

Leave a Reply

Your email address will not be published. Required fields are marked *