Janataa24 NEWS DESK
Gubbi:ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಡಿ.23 ರಂದು ಬೃಹತ್ ಪ್ರತಿಭಟನೆ.
ಗುಬ್ಬಿ: ಗೃಹ ಸಚಿವ ಅಮಿತ್ ಷಾ ಅಂಬೇಡ್ಕರ್, ಅಂಬೇಡ್ಕರ್ ಅಂಬೇಡ್ಕರ್ ಎಂಬ ಸ್ಮರಣೆ ನಿಮಗೆಲ್ಲ ಹತ್ತಿದೆ ಇದರ ಬದಲಿಗೆ ದೇವರ ನೆನೆಪು ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿರುವುದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಮಾಡಿದ್ದಾರೆ ಇದನ್ನು ಖಂಡಿಸಿ ಡಿಸೆಂಬರ್ 23 ರಂದು ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಗನ್ನಾಥ್ ತಿಳಿಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಅಮಿತ್ ಶಾ ಅವರೇ ತಾವು ಇಂದು ಸದನದಲ್ಲಿ ನಿಂತು ಮಾತನಾಡುತ್ತಿದ್ದೀರಾ ಎಂದರೆ ಅದಕ್ಕೆ ಕಾರಣವೇ ಅಂಬೇಡ್ಕರ್ ಅವರು ನೀವು ಕೊಟ್ಟಿರುವಂತಹ ಹೇಳಿಕೆ ಅಂಬೇಡ್ಕರ್ ರವರಿಗೆ ಮಾಡಿರುವಂತಹ ದೊಡ್ಡ ಅವಮಾನ ಭಾರತದ ಸಂವಿಧಾನವನ್ನು ಬರೆದಿರುವಂತಹ ಈ ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿರುವಂತಹ ಇವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ನಿಮಗೆ ಇಲ್ಲ ನೀವು ಕ್ಷಮೆ ಯಾಚಿಸಿದರು ಸಹ ನಾವು ಬೃಹತ್ ಪ್ರತಿಭಟನೆಯನ್ನು ದೇಶದಾದ್ಯಂತ ಮಾಡೇ ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡ ನಿಟ್ಟೂರು ರಂಗಸ್ವಾಮಿ ಮಾತನಾಡಿ ಅಂಬೇಡ್ಕರ್ ಬದಲಿಗೆ ದೇವರನ್ನು ನೆನಪಿಸಿಕೊಳ್ಳಿ ಎಂದು ಹೇಳಿಕೆ ನೀವು ನೀಡಿದ್ದೀರಾ ಸಂವಿಧಾನವೇ ನಮಗೆ ದೇವರು, ಅಂಬೇಡ್ಕರ್ ಅವರು ನಮಗೆ ದೆವರು. ಸಂವಿಧಾನದಲ್ಲಿರುವ
ಪ್ರತಿಯೊಂದು ವಸ್ತು ವಿಷಯವು ಸಹ ಈ ದೇಶದ ತಳಹಾದಿಯಾಗಿದೆ ಎಂಬುದನ್ನು ಮರೆಯಬೇಡಿ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮಿತ್ ಷಾ ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ಅಂಬೇಡ್ಕರ್ ಅವರ ವಿರುದ್ದ ನೀವು ಎಷ್ಟೇ ಮಾತನಾಡಿದರು ಸಹ ನಾವು ಅವರನ್ನು ದೊಡ್ಡ ಮಟ್ಟದಲ್ಲಿಯೇ ನೋಡುತ್ತೇವೆ. ನೋಡಿಯೂ ಇದ್ದೇವೆ ಅಂಬೇಡ್ಕರ್ ಅವರ ಪ್ರತಿಯೊಂದು ವಿಚಾರಧಾರೆಗಳು ಸಹ ಈ ದೇಶಕ್ಕೆ ಪೂರಕವಾಗಿದ್ದು ಸಮಾನತೆಯ ಹರಿಕಾರರಾಗಿದ್ದಾರೆ. ಹಾಗಾಗಿ 23 ರಂದು ನೀವು ಕೊಟ್ಟಿರುವ ಹೇಳಿಕೆಯ ವಿರುದ್ಧ ಬೃಹತ್ ಮಟ್ಟದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡ ಸಚಿನ್ ಮಾತನಾಡಿ ಗುಬ್ಬಿ ಪಟ್ಟಣದ ಮಸೀದಿಯಿಂದ ಹಿಡಿದು ತಾಲೂಕು ಕಚೇರಿ ಅವರಿಗೆ ಮೆರವಣಿಗೆಯಲ್ಲಿ ಸಾಗಿ ಬೃಹತ್ ಪ್ರತಿಭಟನೆಯನ್ನ ಮಾಡುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಕಡಬ ಶಂಕರ್, ರಿಜ್ವಾನ್, ಮಧು, ಮಂಜುನಾಥ್, ಇಮ್ರಾನ್, ಕುಂದರನಹಳ್ಳಿ ನಟರಾಜ್, ಕೆಂಪರಾಜು ಸೇರಿದಂತೆ ದಲಿತ ಮುಖಂಡರು ಅಲ್ಪ ಸಂಖ್ಯಾತ ಮುಖಂಡರು ಹಾಜರಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.