JANATAA24 NEWS DESK
Turuvekere: ಈಗ ಹರಿಯುತ್ತಿರುವ 6.5 TMC ನೀರು ಎಲ್ಲಿಗೆ ಹೋಗುತ್ತೆ ಡಿಕೆ ಶಿವಕುಮಾರ್ ಅವರೇ, ಎಂ ಟಿ ಕೃಷ್ಣಪ್ಪ ಪ್ರಶ್ನೆ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಂ ಟಿ ಕೃಷ್ಣಪ್ಪ ಪತ್ರಿಕಾ ಮಾಧ್ಯಮ ಘೋಷಣೆ ನಡೆಸಿದರು, ಇದೆ ವೇಳೆ ಮಾತನಾಡಿದ ಅವರು ಕುಣಿಗಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ಲಿಂಕ್ ಕೆನಲ್ ಕುರಿತು ಡಿಕೆ ಶಿವಕುಮಾರ್ ರವರು ಪ್ರಸ್ತಾಪಿಸಿ ಅಂದಾಜು ಒಂದು ಸಾವಿರ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಆದರೆ ಕುಣಿಗಲ್ ಕೆರೆಗೆ ಹೇಮಾವತಿ ಕೆನಲ್ ಮೂಲಕ ನೀರು ತರಲು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಮತ್ತು ಸುರೇಶ್ ಗೌಡ ಇದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದು ಹೌದು ಸ್ವಾಮಿ.
ಡಿಕೆಶಿ ಅವರೇ ನಾವು ವಿರೋಧ ಮಾಡುತ್ತೇವೆ ಇದು ನೂರಕ್ಕೆ ನೂರು ಸತ್ಯ ಇದರಲ್ಲಿ ಯಾವುದೇ ರಾಜಕೀಯ ಅಥವಾ ರಾಜಿ ಖಂಡಿತಾ ಇಲ್ಲ ಆದರೆ ಈಗಾಗಲೇ 6.5 ಟಿಎಂಸಿ ನೀರು ಕುಣಿಗಲ್ ಕಡೆ ಹರಿಯುತ್ತಿದೆ, ಈ ನೀರು ಎಲ್ಲಿಗೆ ಹೋಗುತ್ತೆ ಮೊದಲು ರಾಜ್ಯದ ಜನತೆ ಮುಂದೆ ಹೇಳಿ, ಕೇವಲ ಕೃಷ್ಣಪ್ಪ ಸುರೇಶ್ ಗೌಡ ಮಾತ್ರ ಹೋರಾಟ ಮಾಡುತ್ತಿಲ್ಲ ಡಿಕೆಶಿ ಅವರೇ ಈ ಜಿಲ್ಲೆಯ 24 ಲಕ್ಷ ಜನತೆಯ ಹೋರಾಟ, ನಿಮಗೆ ಇದು ತಿಳಿದಿರಲಿ ಜೊತೆಗೆ ನೀವು ಏನೇ ಹೇಳಿದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ ಹೋರಾಟ ಮಾತ್ರ ಮಾಡಿಯೇ ತೀರುತ್ತೇವೆ,
ಇದಲ್ಲದೆ ನೀವು ವೈ ಕೆ ಹುಚ್ಚುಮಾಸ್ತಯ್ಯ ಕುರಿತು ಸಹ ಮಾತನಾಡಿದ್ದೀರಾ ಆದರೆ ಅವರ ಹೋರಾಟಕ್ಕೆ ನೀವುಗಳು ಬೆಲೆ ಕೊಟ್ಟಿದ್ದೀರಾ ಅವರ ಹೋರಾಟ ತುಮಕೂರು ಜಿಲ್ಲೆಗೆ ನೀರು ತರಲೇ ಬೇಕೆಂಬುದು ಹೋರಾಟವಾಗಿತ್ತು ಆದರೆ ನೀವುಗಳು ರೈತರ ಹಿತ ಆಳು ಮಾಡಲು ಹೊರಟಿದ್ದೀರಾ ನಿಮಗೆ ವೈ ಕೆ ಹುಚ್ಚು ಮಾಸ್ತಯ್ಯ ಅವರ ಹೆಸರು ಹೇಳಲು ನೈತಿಕತೆ ಇಲ್ಲ ಇದರ ಜೊತೆಗೆ ತಾವು ಗುಬ್ಬಿ ವಾಸು ಕುರಿತು ಮಾತನಾಡಿದಿರಾ ಅದು ನಿಮ್ಮ ಧರ್ಮ ಮಾತನಾಡಿಕೊಳ್ಳಿ ಅವರು ಧರ್ಮಾತ್ಮ ಇದರಲ್ಲಿ ನಮ್ಮ ಅಭ್ಯಂತರವೇನಿಲ್ಲ ಆದರೆ ನನ್ನ ಕ್ಷೇತ್ರ ಸಿಎಸ್ ಪುರ ಅದನ್ನು ನಾನು ಬಲಿಕೊಡಲು ತಯಾರಿಲ್ಲ ನಾನು ನನ್ನ ಜನದ ಹಿತ ಕಾಪಾಡಿಕೊಳ್ಳಲೇಬೇಕು ಹಾಗಾಗಿ ನಾವು ಮಾತ್ರ ನನ್ನ ಕ್ಷೇತ್ರದ ನೀರನ್ನು ನಾನು ಕೊಡುವುದಿಲ್ಲ ಹೋರಾಟ ಮಾಡಿಯೇ ತೀರುತ್ತೇನೆ ಗುಬ್ಬಿ ಕೂಡ ತುಮಕೂರು ಜಿಲ್ಲೆಯಲ್ಲಿ ಇರೋದು ಅಲ್ಲಿನ ಜನತೆ ಹೋರಾಟ ಮಾಡುವುದು ಬಿಡುವುದು ಜನತೆಯ ಯೋಚನೆ ಮಾಡಲಿ ನನ್ನ ಅಭ್ಯಂತರವೇನಿಲ್ಲ ಎಂದರು.
ಎದೆ ವೇಳೆ ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ತ್ಯಾಗರಾಜು, ಮುನಿಯೂರು ರಂಗಸ್ವಾಮಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.