JANATAA24 NEWS DESK
Turuvekere: ತಾಲೂಕು ಆಡಳಿತದ ವತಿಯಿಂದ ದೇವರ ದಾಸಿಮಯ್ಯ ಜಯಂತೋತ್ಸವ.

ತುರುವೇಕೆರೆ: ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ನೇಕಾರರ ಒಕ್ಕೂಟ ಇವರ ಸಂಯುಕ್ತಯಾಶ್ರಯದಲ್ಲಿ ದೇವರ ದಾಸಿಮಯ್ಯ ಜಯಂತೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದೆ ವೇಳೆ ತಾಲೂಕು ದಂಡಾಧಿಕಾರಿ ಕುಂ, ಇ, ಅಹಮದ್ ಮಾತನಾಡಿ…
ದೇವರ ದಾಸಿಮಯ್ಯ ರವರು ಸರಿಸುಮಾರು ಹತ್ತನೇ ಶತಮಾನದವರು ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನಿಸಿದವರಾಗಿದ್ದು, ಭೌತಿಕವಾಗಿ ಮಾತ್ರವಲ್ಲದೇ ಆಧ್ಯಾತ್ಮಕವಾಗಿಯೂ ಅತ್ಯಂತ ಸಮೃದ್ಧವಾದ ದೇಶ ನಮ್ಮ ಭಾರತ ಆದಿಕಾಲದಿಂದಲೂ ಅನೇಕ ಋಷಿಮುನಿಗಳು ತಮ್ಮ ಅಮೋಘ ತಪಸ್ಸಿನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿ ಇದಾಗಿದ್ದು, ಅಂತಹ ಸಾಧುಗಳಲೊಬ್ಬರು ಶ್ರೀ ದೇವರ ದಾಸಿಮಯ್ಯನವರೂ ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ ಹತ್ತು ಹನ್ನೊಂದನೇ ಶತಮಾನದಲ್ಲಿದ್ದ ಮೊಟ್ಟ ಮೊದಲ ವಚನಕಾರರು ಕೂಡ ಎಂದರು.
ಇದೇ ವೇಳೆ ಬಾಲಕಿ ಹರ್ಷಿಕಾ ದೇವಾಂಗನೇ ಮಾತನಾಡಿ, ದೇವರ ದಾಸಿಮಯ್ಯನ ಜೀವನ ಚರಿತ್ರೆಯನ್ನು ಬಹಳ ಸ್ಪಷ್ಟವಾಗಿ ವಿವರವಾಗಿ ದೇವರ ದಾಸಿಮಯ್ಯ ಹುಟ್ಟಿನಿಂದ ಕೊನೆಯವರಿಗೂ ನಡೆದು ಬಂದ ಹಾದಿಯನ್ನು ನೆನಪಿಸುತ್ತ ಅದ್ಭುತವಾಗಿ ಪರಿಚಯಿಸಿದರು, ಇದೇ ಸಂದರ್ಭದಲ್ಲಿ ಉಪನ್ಯಾಸಕರು ಪ್ರಗತಿಪರ ಸಂಘಟನೆಯ ಮುಖಂಡರುಗಳು, ತಾಲೂಕು ಆಡಳಿತದ ಸಿಬ್ಬಂದಿಗಳು ಹಿರಿಯರು ಮಹಿಳೆಯರು ನೇಕಾರ ಒಕ್ಕೂಟದ ಪದಾಧಿಕಾರಿಗಳು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.