JANATAA24 NEWS DESK
Pavagada: ಅಪಘಾತದಲ್ಲಿ ಮೃತಪಟ್ಟ ಚಾಲಕ ಹನುಮಂತು ಕುಟುಂಬಕ್ಕೆ ಸರ್ಕಾರದ 5 ಲಕ್ಷ ಚೆಕ್ಕನ್ನು ಚಾಲಕರ ಸಂಘದಿಂದ ಹಸ್ತಾಂತರ.

ಪಾವಗಡ: ಪಟ್ಟಣದ ರೂಪ್ಪ ಗ್ರಾಮ ವಾಸಿ ಹನುಮಂತು ಎಂಬ ಚಾಲಕ ಕಳೆದ ವರ್ಷ ವಾಹನ ಅಪಘಾತದಲ್ಲಿ ಮೃತ ಪಟ್ಟಂತ ಹಿನ್ನೆಲೆಯಲ್ಲಿ ಸಂಪೂರ್ಣ ದಾಖಲೆ ಇದ್ದ ಕಾರಣ ಸರ್ಕಾರಿ ಸವಲಾತು ರೀತಿಯಲ್ಲಿ 5 ಲಕ್ಷ ಹಣ ಪಡೆದುಕೊಳ್ಳಲು ಕಾರಣವಾಗಿದೆ ಎಂಬುದಾಗಿ ಕಾರ್ ಚಾಲಕರ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
ಅದೆಷ್ಟೋ ವಾಹನ ಚಾಲಕರು ಯಾವುದೇ ದಾಖಲಾತಿ ಇಲ್ಲದೆ ದಿನನಿತ್ಯ ಚಾಲಕ ವೃತ್ತಿ ಮಾಡುತ್ತಿದ್ದಾರೆ ಆದರೆ ಅವರಿಗೆ ಕುಟುಂಬರಿಗೆ ತಿಳಿಸುವುದೇನೆಂದರೆ ಪ್ರತಿಯೊಬ್ಬರು ಬ್ಯಾಡ್ಜ್ ಹಾಗೂ ಸರ್ಕಾರಿ ಇಂದ ನೀಡಿದಂತಹ ದಾಖಲೆಗಳನ್ನು ಇಟ್ಟುಕೊಂಡು ತಮ್ಮ ದಿನನಿತ್ಯದ ವಾಹನ ಚಾಲನೆ ಮಾಡಬೇಕು ಇಲ್ಲದಿದ್ದರೆ ಇಂತಹ ಅಪಘಾತಗಳು ಸಂಭವಿಸಿದ್ದ ವೇಳೆ ಸರ್ಕಾರದ ಯಾವುದೇ ಅನುಕೂಲ ಪಡೆಯಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದರು.
ನೀವು ಚಲನೆ ಮಾಡುವಾಗ ನಿಮ್ಮ ಹಿಂದೆ ಕುಟುಂಬ ಇರುತ್ತದೆ ಎಂಬುದು ಗಮನ ಇದ್ದು ಸರ್ಕಾರದ ಸವಲತ್ತುಗಳು ಪಡೆಯಲು ಹಾಗೂ ತಮ್ಮ ಒಂದು ಕುಟುಂಬ ನಿರ್ವಹಣೆಗೆ ಸರ್ಕಾರದ ನಿಂದ ನೀಡಬೇಕಾದ ಸೌಲತ್ತುಗಳು ಪಡೆಯಲು ಇತರೆ ವ್ಯವಸ್ಥೆ ಪಡೆದುಕೊಳ್ಳಬೇಕು ಆಗಲೇ ಸಮಸ್ಯೆ ಬಂದಾಗ ನಾವು ಅನುಕೂಲ ಪಡೆಯಲು ಸಾಧ್ಯ ಎಂದರು.
ತಾಲೂಕಿನಲ್ಲಿ ಇರುವಂತ ಎಲ್ಲಾ ಚಾಲಕರು ಮೊದಲು ತಮ್ಮ ಬ್ಯಾಡ್ಜನ್ನು ಮಾಡಿಸಿಕೊಳ್ಳಿ ಸರ್ಕಾರದ ಸವಲತ್ತು ಪಡೆದುಕೊಳ್ಳಿ ಎಂದರು.
ಚಾಲಕರ ಸಂಘದ ಕಾರ್ಯದರ್ಶಿ ರಘು ಮಾತನಾಡಿ ಚಾಲಕರು ತಮ್ಮ ಕುಟುಂಬದ ಯೋಚನೆ ಮಾಡಿ ದಿನನಿತ್ಯ ತಮ್ಮ ಒಂದು ವೃತ್ತಿ ವೇಳೆಯಲ್ಲಿ ಇರಬೇಕಾದಂತ ಎಲ್ಲಾ ಸರ್ಕಾರಿ ಕಡತಗಳು ತಮ್ಮಲ್ಲಿ ಇಟ್ಟುಕೊಳ್ಳುವುದರಿಂದ ಇಂತಹ ಸೌವಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದರು. ಹಾಗಾಗಿ ಪ್ರತಿಯೊಬ್ಬರೂ ಚಾಲಕರು ಸರ್ಕಾರದ ನಿಯಮದ ಪ್ರಕಾರ ತಮ್ಮ ಕಡತಗಳನ್ನು ಮಾಡಿಸಿಕೊಳ್ಳಬೇಕು ಎಂದರು.
ಚಾಲಕರ ಸಂಘದ ಖಜಾಂಚಿ ಫಯಾಜ್ ಮಾತನಾಡಿ ಸಂಘದ ಸತತ ಹೋರಾಟ ಇಂದು ಮೃತಪಟ್ಟ ಚಾಲಕನಿಗೆ 5 ಲಕ್ಷ ಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ವೇಳೆ ಚಾಲಕರ ಸಂಘದ ಚಾಲಕರಾದ ತಿಮ್ಮಣ್ಣ. ಪ್ರಸಾದ್. ಶಂಕರ. ನಾರಣಪ್ಪ ಮಂಜುನಾಥ್. ನೂರು ಮಹಮ್ಮದ್ .ರಾಜು. ಬಸವರಾಜ್. ಸೂರಿ. ಪ್ರದೀಪ್. ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.