Bengaluru: 5000 ಸಂಬಳಕ್ಕಾಗಿ ಬಂದು 50 ಲಕ್ಷ ದೋಚಿ ಪರಾರಿಯಾದ ಅಡುಗೆ ಭಟ್ಟ
Janataa24 NewsDesk
ಬೆಂಗಳೂರ: ಕದ್ದ ಚಿನ್ನಾಭರಣ ಸಮೇತ ರೈಲಿನಲ್ಲಿ ಎಸ್ಕೇಪ್ ಆದ ಅಡುಗೆ ಭಟ್ಟ. 50 ಲಕ್ಷ ಚಿನ್ನಾಭರಣದ ಸಮೇತ ಮೂರು ರಾಜ್ಯ ಸುತ್ತಿ ಸಿಕ್ಕಿಬಿದ್ದ ಭಟ್ಟ, 5 ಸಾವಿರ (Five Thousand) ರೂಪಾಯಿ ಸಂಬಳ ಜಾಸ್ತಿ ಮಾಡದ್ದಕ್ಕೆ ಕಳ್ಳತನ ಮಾಡಿದ ಅಡುಗೆ ಭಟ್ಟ.

ಇತ್ತೀಚಿಗೆ ಉದ್ಯಾನ ನಗರಿಯಲ್ಲಿ ಎಂತೆಂತಾ ಖತರ್ನಾಕ್ ಆಸಾಮಿಗಳು ಇದ್ದಾರೆ ಅಂತ ಗೊತ್ತಾದ್ರೆ ನೀವು ನಿಜಕ್ಕೂ ಶಾಕ್(shock) ಆಗ್ತೀರಾ. 5 ಸಾವಿರ ರೂಪಾಯಿ ಸಂಬಳ (salary) ಜಾಸ್ತಿ ಮಾಡದ್ದಕ್ಕೆ ಅಡುಗೆ ಭಟ್ಟನೊಬ್ಬ ತಾನು ಕೆಲಸ ಮಾಡುವ ಮನೆಯಲ್ಲಿ ಬರೋಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಮಹದೇವಪುರ ಆರಕ್ಷಕ ಠಾಣೆಯ (Police Station) ವ್ಯಾಪ್ತಿಯಲ್ಲಿ ನೆಡೆದ ಕೃತ್ಯ. ಖತರ್ನಾಕ್ ಅಡುಗೆಭಟ್ಟನನ್ನು ಬಂಧಿಸಿ ತಂದು ಪೋಲೀಸರು.
ಮಹದೇವಪುರ ಪೊಲೀಸರು (Police) ಬಂಧಿಸಿರೋ ಈ ಅಡುಗೆಭಟ್ಟನ ಹೆಸರು ಸುರೇಂದ್ರ ಕಾಮತ್. ಈ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಮಹದೇವಪುರದ ಅಮಿತ್ ಜೈನ್ ಎಂಬುವವರ ಜೊನಾಶ ಪ್ಯಾರಡೈಸ್ ವಿಲ್ಲಾದಲ್ಲಿ ಅಡುಗೆ ಭಟ್ಟನಾಗಿದ್ದ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/turuvekere-assault-on-village-panchayat-member/