Document

BY Vijayendra: ಮುನಿಸು ಮರೆತು ನಮ್ಮೊಂದಿಗೆ ಕೈ ಜೋಡಿಸಿ ಈಶ್ವರಪ್ಪ ಬಳಿ ವಿಜಯೇಂದ್ರ ಮನವಿ.

Janataa24 NEWS DESK

BY Vijayendra: ಮುನಿಸು ಮರೆತು ನಮ್ಮೊಂದಿಗೆ ಕೈ ಜೋಡಿಸಿ ಈಶ್ವರಪ್ಪ ಬಳಿ ವಿಜಯೇಂದ್ರ ಮನವಿ.

BY Vijayendra Narendra Modi

ಬೆಂಗಳೂರು : ಲೋಕಸಭೆ ಚುನಾವಣೆ ಎದುರಾದ ದಿನಗಳಿಂದ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಬಿರುಸುಗೊಂಡಿತ್ತು. ಟಿಕೆಟ್ ಘೋಷಣೆಯಾದ ಬೆನ್ನೆಲ್ಲೆ ಆಕಾಂಕ್ಷಿಗಳು ಚುನಾವಣೆ ಚಟುವಟಿಕೆಗಳಿಂದ ದೂರ ಉಳಿದು ಬಿಟ್ಟರು.

ಮಗನಿಗೆ ಟಿಕೆಟ್ ಪಡೆಯುವೆ ಎನ್ನುವ ಭರಸವೆಯಲ್ಲಿದ್ದ ಮಾಜಿ ಸಚಿವ ಈಶ್ವರಪ್ಪ ಅವರು ಟಿಕೆಟ್ ಮಾಜಿ ಮುಖ್ಯಮುಂತ್ರಿ ಪುತ್ರ ಬಿವೈ ರಾಘವೇಂದ್ರ ಪಾಲಾದ ಕ್ಷಣದಿಂದಲೇ ರಾಜ್ಯ ಬಿಜೆಪಿ ಪಕ್ಷದ ವಿರುದ್ದ ಕೆಂಡಮಂಡಲವಾಗಿದ್ದರು. ಯಡ್ಡಿಯೂರಪ್ಪ ವಿರುದ್ದ ತಮ್ಮ ನೋವು ತಮಗೆ ಆದ ಅನ್ಯಾಯ ಟಿಕೆಟ್ ವಂಚನೆ ಕುರಿತು ಮಾಧ್ಯಮಗಳ ಬಳಿ ರಾಜ್ಯದಲ್ಲಿರುವುದು ಅಪ್ಪ ಮಕ್ಕಳ ಬಿಜೆಪಿ ಪಕ್ಷ ಎಂದೆಲ್ಲ ಕಟುವಾಗಿ ಟೀಕಿಸಿದ್ದರು.

ಶಿವಮೊಗ್ಗದಲ್ಲಿ ಮಾತನಾಡಿದ  ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಲ್ಲಿ ಕೈ ಮುಗಿದು ಏನೇ ಮನಸ್ಸಿಗೆ ಪಕ್ಷದಿಂದ ವೈಯಕ್ತಿಕವಾಗಿ ನೋವು ಆಗಿದ್ದರೆ ದಯವಿಟ್ಟು ಅದನ್ನಾ ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ ನಮ್ಮ ಕೈ ಬಲಪಡಿಸಬೇಕು ಎಂದು ಹೇಳಿದ್ದಾರೆ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ(Narendra Modi)  ಅವರು ಪ್ರಧಾನಿ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು. ನೀವು ಕೈಗೊಂಡಿರುವ ಬಂಡಾಯ ಸ್ವರ್ಧೆಯಿಂದ ದಯವಿಟ್ಟು ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ನೀವು ಬೆಂಬಲ ಸೂಚಿಸಿ ಅವರನ್ನಾ ಗೆಲ್ಲಿಸಿ ಪಾರ್ಟಿಮೆಂಟ್ ಗೆ ಕಳಿಸಿಕೊಡಬೇಕಿದೆ.ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ನಾವು ಸೆಣಸಾಡಬೇಕಿದೆ. ಈ ಬಾರಿಯೂ ನಾವು ಇಲ್ಲಿ ಕಮಲವನ್ನು ಅಧಿಕಾರಕ್ಕೆ ತರಬೇಕು ದಯವಿಟ್ಟು ನಿಮ್ಮ ಮನಿಸು ಮರೆತು ಒಂದಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವಂತೆ ಬಿಜೆಪಿ ರಾಜ್ಯಧ್ಯಕ್ಷ ಮನವಿ ಮಾಡಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Madhugiri: ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 4.80 ಲಕ್ಷ ಪೋಲೀಸರ ವಶಕ್ಕೆ.

Document

Leave a Reply

Your email address will not be published. Required fields are marked *